‘ವನಮಹೋತ್ಸವ ಪರಿಸರ ಸಂರಕ್ಷಣೆ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ’
‘ವನಮಹೋತ್ಸವ ಪರಿಸರ ಸಂರಕ್ಷಣೆ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ’
ಧಾರವಾಡ 20: ವನಮಹೋತ್ಸವವು ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಲಯನ್ಸ್ ವಿಶ್ರಾಂತ ಗವರ್ನರ್ ಹರ್ಷ ದೇಸಾಯಿ ಹೇಳಿದರು.
‘ಧಾರವಾಡ ಲಯನ್ಸ್ ಸಂಸ್ಥೆಯು ಹಮ್ಮಿಕೊಂಡ ಗಿರಿನಗರದ ಶೀಲಾ ಕೊಪ್ಪಿಕರ ವಿದ್ಯಾ ಮಂದಿರ ಕಟ್ಟಡದ ಆವರಣದಲ್ಲಿ ಸಸಿಯನ್ನು ನೆಟ್ಟು ಮಾತನಾಡಿ, ನಾವು ನಮ್ಮ ಪರಿಸರವನ್ನು ರಕ್ಷಿಸುವುದರೊಂದಿಗೆ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ರೂಪಿಸಬಹುದು ಎಂದು ಹೇಳಿದರು.
‘ಲಯನ್ಸ್ ಅಧ್ಯಕ್ಷ ಅಶ್ವಿನ್ ಕೊಪ್ಪಿಕರ ಅಧ್ಯಕ್ಷತೆ ವಹಿಸಿದ್ದರು. ಆವರಣದಲ್ಲಿ 25 ಸಸಿಗಳನ್ನು ನೆಡಲಾಯಿತು.
‘ವಲಯ ಅಧ್ಯಕ್ಷೆ ಶೈಲಾ ಕರಗುದರಿ, ಆನಂದ ಕಮಲಾಪುರ, ಹರ್ಷ ಡಂಬಳ, ಡಾ.ಕೆ.ವಿ.ಅಚ್ಯುತ,ಗುರುರಾಜ ಪಿಸೆ,ಉಷ್ಮಾ ದೇಸಾಯಿ, ಆರತಿ ಕಮಲಾಪುರ, ನಂದಿನಿ ಬಾಗಿ,ಶುಭದಾ ಮುಧೋಳಕರ,ಶಿಲ್ಪಾ ಪಿಸೆ, ರಶ್ಮೀ ಭಾರದ್ವಾಜ್, ಉಷಾ ಗದ್ದಗಿಮಠ, ಡಾ. ಶ್ರೇಯಾ ಪಾಸ್ತೆ, ನಮ್ರತಾ ಪಾಟೀಲ, ಡಾ.ಅನಿರುಧ್ ಕುಲಕರ್ಣಿ ಇತರರು ಹಾಜರಿದ್ದರು.
‘ಕಾರ್ಯದರ್ಶಿ ಸುರೇಶ ಗುದಗನವರ ಸ್ವಾಗತಿಸಿದರು. ರಾಜಶ್ರೀ ಗುದಗನವರ ನಿರೂಪಿಸಿದರು. ಖಜಾಂಚಿ ಶ್ರೀಕಾಂತ ದೇವಗಿರಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 